KMF GUMUL ನೇಮಕಾತಿ
KMF GUMUL ನೇಮಕಾತಿ 2026: ಕಲಬುರಗಿ ಹಾಲು ಒಕ್ಕೂಟದಲ್ಲಿ 50 ಹುದ್ದೆಗಳಿಗೆ ಅರ್ಜಿ ಆಹ್ವಾನ! KMF GUMUL Recruitment 2026
GUMUL Recruitment 2026: ಕಲಬುರಗಿ-ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 50 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಮತ್ತು ಸಹಕಾರಿ ವಲಯದಲ್ಲಿ ಭದ್ರತೆಯುಳ್ಳ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಈ ನೇಮಕಾತಿಯು ಕಲ್ಯಾಣ ಕರ್ನಾಟಕ ಮತ್ತು ಸ್ಥಳೀಯೇತರ ವೃಂದದ ಅಭ್ಯರ್ಥಿಗಳಿಗೆ ಸೂಕ್ತ ವೇತನ ಶ್ರೇಣಿಯೊಂದಿಗೆ ಉತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ನೆರವಾಗ
ಉದ್ಯೋಗ ವಿವರ
ನೇಮಕಾತಿ ಸಂಸ್ಥೆ: ಕಲಬುರಗಿ-ಬೀದರ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ
ಹುದ್ದೆಗಳ ಹೆಸರು: ಸಹಾಯಕ ವ್ಯವಸ್ಥಾಪಕರು, ಲೆಕ್ಕಾಧಿಕಾರಿ, ತಾಂತ್ರಿಕ ಅಧಿಕಾರಿ, ಹಿರಿಯ ಕೆಮಿಸ್ಟ್, ಡೈರಿ ಸೂಪರವೈಸರ, ವಿಸ್ತರಣಾಧಿಕಾರಿ, ಆಡಳಿತ ಸಹಾಯಕ, ಲೆಕ್ಕ ಸಹಾಯಕ, ಮಾರುಕಟ್ಟೆ ಸಹಾಯಕ, ಕಿರಿಯ ತಾಂತ್ರಿಕರು ಮತ್ತು ಖರಿದಿ/ಉಗ್ರಾಣ ಅಧಿಕಾರಿ.
ಹುದ್ದೆಗಳ ಸಂಖ್ಯೆ: 50 ಹುದ್ದೆಗಳು
ಉದ್ಯೋಗ ಸ್ಥಳ: ಕಲಬುರಗಿ, ಬೀದರ ಮತ್ತು ಯಾದಗಿರಿ ಜಿಲ್ಲೆಗಳು
ಅರ್ಜಿ ಸಲ್ಲಿಸುವ ಬಗೆ: ಆನ್ಲೈನ್ ಮುಖಾಂತರ ಮಾತ್ರ
ಹುದ್ದೆಗಳ ವಿವರ
- ಸಹಾಯಕ ವ್ಯವಸ್ಥಾಪಕರು : 04 ಹುದ್ದೆಗಳು
- ಲೆಕ್ಕಾಧಿಕಾರಿ: 01 ಹುದ್ದೆ
- ತಾಂತ್ರಿಕ ಅಧಿಕಾರಿ : 01 ಹುದ್ದೆ
- ಹಿರಿಯ ಕೆಮಿಸ್ಟ್: 02 ಹುದ್ದೆಗಳು
- ಡೈರಿ ಸೂಪರವೈಸರ ದರ್ಜೆ-2 : 05 ಹುದ್ದೆಗಳು
- ವಿಸ್ತರಣಾಧಿಕಾರಿ ದರ್ಜೆ-3: 13 ಹುದ್ದೆಗಳು
- ಆಡಳಿತ ಸಹಾಯಕ ದರ್ಜೆ-3: 06 ಹುದ್ದೆಗಳು
- ಲೆಕ್ಕ ಸಹಾಯಕ ದರ್ಜೆ-3: 08 ಹುದ್ದೆಗಳು
- ಮಾರುಕಟ್ಟೆ ಸಹಾಯಕ ದರ್ಜೆ-3: 10 ಹುದ್ದೆಗಳು
- ಕಿರಿಯ ತಾಂತ್ರಿಕರು : 04 ಹುದ್ದೆಗಳು
- ಖರಿದಿ/ಉಗ್ರಾಣ ಅಧಿಕಾರಿ: 01 ಹುದ್ದೆ
ವಿದ್ಯಾರ್ಹತೆ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ತಾಂತ್ರಿಕ ಮಂಡಳಿಯಿಂದ ಈ ಕೆಳಕಂಡ ವಿದ್ಯಾರ್ಹತೆಗಳನ್ನು ಹೊಂದಿರಬೇಕು:
•ಸಹಾಯಕ ವ್ಯವಸ್ಥಾಪಕರು: ಬಿ.ವಿ.ಎಸ್.ಸಿ. ಪದವಿ ಮತ್ತು ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ಜ್ಞಾನ.
•ಲೆಕ್ಕಾಧಿಕಾರಿ: ಪ್ರಥಮ ದರ್ಜೆಯಲ್ಲಿ ಎಂ.ಕಾಂ ಸ್ನಾತಕೋತ್ತರ ಪದವಿ ಜೊತೆಗೆ ಸಿ.ಎ/ಐ.ಸಿ.ಡಬ್ಲ್ಯೂ.ಎ.ಐ ಮತ್ತು ಟ್ಯಾಲಿ ಜ್ಞಾನ ಹಾಗೂ 3 ವರ್ಷಗಳ ಅನುಭವ.
•ತಾಂತ್ರಿಕ ಅಧಿಕಾರಿ: ಬಿ.ಟೆಕ್ / ಬಿ.ಎಸ್.ಸಿ ಪದವಿ ಮತ್ತು 2 ವರ್ಷಗಳ ಸೇವಾ ಅನುಭವ.
•ಹಿರಿಯ ಕೆಮಿಸ್ಟ್: ಪ್ರಥಮ ದರ್ಜೆಯಲ್ಲಿ ಬಿ.ಎಸ್.ಸಿ ಜೊತೆಗೆ 2 ವರ್ಷಗಳ ಲ್ಯಾಬ್ ಅನುಭವ.
•ಡೈರಿ ಸೂಪರವೈಸರ: ಸಂಬಂಧಿಸಿದ ವಿಭಾಗದಲ್ಲಿ ಡಿಪ್ಲೋಮಾ ತಾಂತ್ರಿಕ ವಿದ್ಯಾರ್ಹತೆ ಮತ್ತು 2 ವರ್ಷಗಳ ಅನುಭವ.
•ವಿಸ್ತರಣಾಧಿಕಾರಿ ದರ್ಜೆ-3: ಯಾವುದೇ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಮತ್ತು ಕಂಪ್ಯೂಟರ್ ನಿರ್ವಹಣಾ ಜ್ಞಾನ.
•ಆಡಳಿತ ಸಹಾಯಕ ದರ್ಜೆ-3: ಯಾವುದೇ ಪದವಿಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣ ಮತ್ತು ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ಜ್ಞಾನ.
•ಲೆಕ್ಕ ಸಹಾಯಕ ದರ್ಜೆ-3: ಬಿ.ಕಾಂ ಪದವಿಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣ ಮತ್ತು ಟ್ಯಾಲಿ ತರಬೇತಿ ಜ್ಞಾನ.
•ಮಾರುಕಟ್ಟೆ ಸಹಾಯಕ ದರ್ಜೆ-3: ಮಾರುಕಟ್ಟೆ ವಿಷಯದಲ್ಲಿ ಬಿ.ಬಿ.ಎಂ / ಬಿ.ಬಿ.ಎ ಪದವಿಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣ ಮತ್ತು ಕಂಪ್ಯೂಟರ್ ಜ್ಞಾನ.
•ಕಿರಿಯ ತಾಂತ್ರಿಕರು: ಕನಿಷ್ಠ ಎಸ್.ಎಸ್.ಎಲ್.ಸಿ ಯೊಂದಿಗೆ ಸಂಬಂಧಪಟ್ಟ ಟ್ರೇಡ್ನಲ್ಲಿ ಐ.ಟಿ.ಐ ಉತ್ತೀರ್ಣ ಹಾಗೂ ಅಪ್ರೆಂಟಿಸ್ ಪ್ರಮಾಣಪತ್ರ ಮತ್ತು 2 ವರ್ಷಗಳ ಅನುಭವ.
•ಖರಿದಿ/ಉಗ್ರಾಣ ಅಧಿಕಾರಿ: ಪ್ರಥಮ ದರ್ಜೆಯಲ್ಲಿ ಬಿ.ಕಾಂ/ಬಿ.ಬಿ.ಎಂ ಪದವಿಯೊಂದಿಗೆ ಪಿ.ಜಿ.ಡಿ.ಎಂ.ಎಂ ಅಥವಾ ಎಂ.ಬಿ.ಎ ಮತ್ತು
ವಯೋಮಿತಿ & ವಯೋಮಿತಿಯಲ್ಲಿ ಸಡಿಲಿಕೆ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ತುಂಬಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳ ವಯೋಮಿತಿ ಇರುತ್ತದೆ.
ಸರ್ಕಾರದ ಆದೇಶದನ್ವಯ ಪ್ರಸ್ತುತ ನೇಮಕಾತಿಯಲ್ಲಿ ಒಂದು ಬಾರಿಯ ಕ್ರಮವಾಗಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಹೆಚ್ಚುವರಿ ಸಡಿಲಿಕೆಯನ್ನು ನೀಡಲಾಗಿದೆ. ಇದರ ಅನ್ವಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರ-1ಕ್ಕೆ 45 ವರ್ಷಗಳು, ಹಿಂದುಳಿದ ವರ್ಗಗಳಿಗೆ 43 ವರ್ಷಗಳು ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 40 ವರ್ಷಗಳ ಗರಿಷ್ಠ ವಯೋಮಿತಿ ಇರುತ್ತದೆ. ಇದಲ್ಲದೆ ವಿಕಲಚೇತನ ಹಾಗೂ ವಿಧವೆ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.
ವೇತನಶ್ರೇಣಿ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಆಕರ್ಷಕ ಮಾಸಿಕ ವೇತನವನ್ನು ನೀಡಲಾಗುತ್ತದೆ:
•ಸಹಾಯಕ ವ್ಯವಸ್ಥಾಪಕರು: ರೂ. 83700-155200
ಲೆಕ್ಕಾಧಿಕಾರಿ / ತಾಂತ್ರಿಕ ಅಧಿಕಾರಿ / ಖರಿದಿ ಉಗ್ರಾಣ ಅಧಿಕಾರಿ: ರೂ. 69250-134200
•ಹಿರಿಯ ಕೆಮಿಸ್ಟ್: ರೂ. 65950-124900
ಡೈರಿ ಸೂಪರವೈಸರ ದರ್ಜೆ-2 / ವಿಸ್ತರಣಾಧಿಕಾರಿ ದರ್ಜೆ-3: ರೂ. 54175-99400
•ಆಡಳಿತ / ಲೆಕ್ಕ / ಮಾರುಕಟ್ಟೆ ಸಹಾಯಕರು ಮತ್ತು ಕಿರಿಯ ತಾಂತ್ರಿಕರು: ರೂ. 34100-67600
ಅರ್ಜಿ ಶುಲ್ಕ
•ಸಾಮಾನ್ಯ ಅರ್ಹತೆ ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: ರೂ. 1000/-
•ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ: ರೂ. 500/-
•ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಪಾವತಿಸಬೇಕು. ಡಿ.ಡಿ ಅಥವಾ ಮನಿ ಆರ್ಡರ್ಗಳನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಕಡ್ಡಾಯವಾಗಿ ಒಕ್ಕೂಟದ ಅಧಿಕೃತ ಜಾಲತಾಣದ ಮೂಲಕ ಆನ್ಲೈನ್ನಲ್ಲಿಯೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಹಂತಗಳು ಈ ಕೆಳಗಿನಂತಿವೆ:
ಮೊದಲಿಗೆ ಒಕ್ಕೂಟದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.
ಅಲ್ಲಿ ನೀಡಿರುವ ಅಧಿಸೂಚನೆ ಮತ್ತು ಸೂಚನೆಗಳನ್ನು ಸಂಪೂರ್ಣವಾಗಿ ಓದಿ, ಚೆಕ್ ಬಾಕ್ಸ್ ಒತ್ತುವ ಮೂಲಕ ಒಪ್ಪಿಕೊಂಡು ಮುಂದುವರಿಯಿರಿ.
ನೀವು ಅರ್ಜಿ ಸಲ್ಲಿಸಲಿಚ್ಛಿಸುವ ನಿಗದಿತ ಹುದ್ದೆಯನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ.
ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯವಿರುವ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
ಸ್ವಯಂ ದೃಢೀಕರಿಸಿದ ಇತ್ತೀಚಿನ ಬಿಳಿ ಹಿನ್ನೆಲೆಯುಳ್ಳ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ಜಾತಿ, ಗ್ರಾಮೀಣ, ಕನ್ನಡ ಮಾಧ್ಯಮ, ವಿಕಲಚೇತನ ಅಥವಾ ಅನುಭವದ ಪ್ರಮಾಣಪತ್ರಗಳಿದ್ದಲ್ಲಿ ಅವುಗಳನ್ನು ನಿಗದಿತ ಗಾತ್ರದಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ಎಲ್ಲಾ ವಿವರಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಂಡ ನಂತರ ಮುಂದಿನ ಹಂತಕ್ಕೆ ತೆರಳಿ ಸಬ್ಮಿಟ್ ಮಾಡಿ.
ಪೇಮೆಂಟ್ ಗೇಟ್ವೇ ಬಳಸಿ ನಿಗದಿತ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
ಶುಲ್ಕ ಪಾವತಿಯಾದ ನಂತರ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಕಡ್ಡಾಯವಾಗಿ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಇಟ್ಟುಕೊಳ್ಳಿ.
ಆಯ್ಕೆ ವಿಧಾನ
ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಮಾಡಲಾಗುತ್ತದೆ. ಕರ್ನಾಟಕ ಸಹಕಾರ ಸಂಘಗಳ ನಿಯಮಗಳ ಪ್ರಕಾರ ಒಟ್ಟು 200 ಅಂಕಗಳಿಗೆ ವಸ್ತುನಿಷ್ಠ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಕನ್ನಡ ಭಾಷೆ (50 ಅಂಕ), ಆಂಗ್ಲ ಭಾಷೆ (25 ಅಂಕ), ಸಾಮಾನ್ಯ ಜ್ಞಾನ (25 ಅಂಕ), ಸಹಕಾರ ಮತ್ತು ಕಂಪ್ಯೂಟರ್ ವಿಷಯ (50 ಅಂಕ), ಭಾರತೀಯ ಸಂವಿಧಾನ (25 ಅಂಕ) ಹಾಗೂ ಹಾಲು ಒಕ್ಕೂಟಕ್ಕೆ ಸಂಬಂಧಿಸಿದ ಚಟುವಟಿಕೆಗಳು (25 ಅಂಕ) ಒಳಗೊಂಡಿರುತ್ತವೆ. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು 15 ಅಂಕಗಳ ಮೌಖಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ. ಅಂತಿಮವಾಗಿ ಲಿಖಿತ ಪರೀಕ್ಷೆಯ ಶೇ. 85 ರಷ್ಟು ಅಂಕಗಳು ಮತ್ತು ಸಂದರ್ಶನದ ಅಂಕಗಳನ್ನು ಕ್ರೋಡೀಕರಿಸಿ ಮೆರಿಟ್ ಹಾಗೂ ಮೀಸಲಾತಿ ನಿಯಮಾವಳಿಗಳ ಅನ್ವಯ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುವುದು.
ಪ್ರಮುಖ ದಿನಾಂಕಗಳು
ವಿವರಗಳು ದಿನಾಂಕಗಳು
ಅಧಿಕೃತ ನೇಮಕಾತಿ ಪ್ರಕಟಣೆ ಹೊರಡಿಸಿದ ದಿನಾಂಕ 27-05-2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 29-05-2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27-06-2026
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 27-06-2026
ಪ್ರಮುಖ ಲಿಂಕಗಳು
ಅಧಿಕೃತ ವೆಬ್ಸೈಟ್ ಲಿಂಕ್https://virtualofficeerp.com/gumul2026/instructio
ಅಧಿಕೃತ ಟೆಲಿಗ್ರಾಂ ಲಿಂಕ್ Theindinfo. com
Comments
Post a Comment